Clubhouse logo

Krupal K G

@kangondhi

342

friends

Moderator:; ಕ್ಲಬ್ ಹೌಸ್ ನ 'ಷೇರುಪೇಟೆ ವಿಚಾರ ಮಂಟಪ' ರಾತ್ರಿ 9.30 ರಿಂದ Author, Stock market intermediary, Columnist, Trainer In capital market more than 4 decades, was a member of Bangalore Stock Exchange,  Addressed investors meets at various parts of the State   under the aegis of  SEBI, B S E, N S E,  Bangalore Stock Exchange, Institute of Company Secretaries, Institute of Chartered Accountants of India, many Broking Houses.  ಷೇರುಪೇಟೆಯ ಬಗ್ಗೆ ಕನ್ನಡದ   ದಿನಪತ್ರಿಕೆ   ಪ್ರಜಾವಾಣಿಯಲ್ಲಿ   ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದ  ಇವರ   ಅಂಕಣ  ' ಷೇರುಸಮಾಚಾರ '  ಓದುಗರ   ಮೆಚ್ಚಿನ   ಅಂಕಣವಾಗಿತ್ತು.   ಇದಕ್ಕೂ ಮುನ್ನ ಇವರ ಅಂಕಣಗಳು  ಕನ್ನಡಪ್ರಭ,   ಸಂಯುಕ್ತ ಕರ್ನಾಟಕ,   ಉದಯವಾಣಿಯಲ್ಲಿ, ಹಿಂದಿನ ' ಉಷಾಕಿರಣ ' ದಿನಪತ್ರಿಕೆಯಲ್ಲಿ ' ಷೇರುಪೇಟೆನಿತ್ಯನೋಟ ' ಎಂಬ ಶೀರ್ಷಿಕೆಯಡಿ ಪ್ರತಿದಿನವೂ  ಪ್ರಕಟವಾಗುತ್ತಿತ್ತು. ಶೈಕ್ಷಣಿಕ ಪತ್ರಿಕೆ 'ದಿಕ್ಸೂಚಿ ' ಯ ಸಂಪಾದಕೀಯ ಮಂಡಳಿಯಲ್ಲಿದ್ದಾಗ ಆರ್ಥಿಕ ಸಾಕ್ಷರತಾ ಲೇಖನಗಳು ಪ್ರಕಟವಾಗಿವೆ. *ಕರ್ಮವೀರ* ವಾರಪತ್ರಿಕೆಯಲ್ಲಿ ಅಂಕಣ 'ಷೇರುಪೇಟೆ - ಜ್ಞಾನ ವಾಹಿನಿ' ಶೀರ್ಷಿಕೆಯಡಿ ಪ್ರತಿವಾರವೂ ಪ್ರಕಟವಾಗುತ್ತಿದೆ. ಕೃತಿಗಳು: ಷೇರು ಜಗತ್ತು ಷೇರು ಜಗತ್ತಿನ ಸುತ್ತ ಷೇರು ಸಂಪತ್ತು ಷೇರು ಸಂಜೀವಿನಿ SHERU SAJIVINI Kannada book  with an exhaustive coverage on Stock Market information, operation etc,  from retail point, released in Dec 2023, Useful handbook for new entrants to the Stock Market. Translated for NSE Academy and Karnataka State Higher Education Council, Instructor work book ' Financial Education and Investment Awareness ' from English to Kannada. 1. ಶಾಲಾ ಮಕ್ಕಳಿಗಾಗಿ ಆರ್ಥಿಕ ಸಾಕ್ಷರತೆ 2. ಆರ್ಥಿಕ ಯೋಜನೆಗಳ ಅಧ್ಯಯನ: ಯುವ ಹೂಡಿಕೆದಾರರಿಗಾಗಿ 3. ಹೂಡಿಕೆ ಯೋಜನೆ ರೂಪಿಸುವಿಕೆ: ಗೃಹಿಣಿಯರಿಗಾಗಿ 4. ಮಾಧ್ಯಮ ವರ್ಗದವರಿಗಾಗಿ ಆರ್ಥಿಕ ಶಿಕ್ಷಣ 5.ವೃತ್ತಿ ನಿರತರಿಗಾಗಿ ಹೂಡಿಕೆ ಯೋಜಿಸುವಿಕೆ 6. ನಿವೃತ್ತಿ ದಾರರಿಗೆ ಹೂಡಿಕೆ ಯೋಜನೆ ರೂಪಿಸುವಿಕೆ 7. ಆರ್ಥಿಕ ಶಿಕ್ಷಣ ಕೈಪಿಡಿ ಕೃತಿಗಳನ್ನು ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ, SEBI ಗಾಗಿ ಆರ್ಥಿಕ ಒಳಗೊಳ್ಳುವಿಕೆ - ಪಾಲ್ಗೊಳ್ಳುವಿಕೆ :  ' ಸಾಮಾನ್ಯರ ನಡೆ - ಆರ್ಥಿಕ ಸಾಕ್ಷರತೆ ಕಡೆ ' ಎಂದು ಜನಸಾಮಾನ್ಯರಲ್ಲಿ ಷೇರುಪೇಟೆ ಬಗ್ಗೆ ಜಾಗೃತಿಗಾಗಿ,   ಬೆಂಗಳೂರು  ದೂರದರ್ಶನದ   ಚಂದನಾವಾಹಿನಿಯಲ್ಲಿ    ಮುಂಜಾನೆ  ನೇರ ಪ್ರಸಾರವಾಗುವ ' ಷೇರುಪೇಟೆ ' ಕಾರ್ಯಕ್ರಮದಲ್ಲಿ ತಜ್ಞರಾಗಿ ಭಾಗವಹಿಸಿ,  ಕೇಳುಗರ   ಪ್ರಶ್ನೆಗಳಿಗೆ   ನೇರ   ಉತ್ತರ  ನೀಡಿರುತ್ತಾರೆ.    ಇತರೆವಾಹಿನಿಗಳಲ್ಲೂ   ಷೇರುಪೇಟೆ  ಕಾರ್ಯಕ್ರಮಗಳಲ್ಲಿ  ಭಾಗಿಯಾಗಿದ್ದಾರೆ. ಬೆಂಗಳೂರು   ಆಕಾಶವಾಣಿಯ   ಎಫ್.ಎಂ  ಮತ್ತು  ವಿವಿಧಭಾರತಿಯಲ್ಲೂ  ಷೇರುಪೇಟೆಬಗ್ಗೆ  ನೇರಪ್ರಸಾರ   ಕಾರ್ಯಕ್ರಮದಲ್ಲಿ   ಭಾಗವಹಿಸಿದ್ದಾರೆ. ಷೇರುಪೇಟೆಯಲ್ಲಿ ಯಶಸ್ಸಿನ ಸರಳ ಸಮೀಕರಣ: ಅಧ್ಯಯನದಿಂದ ಅರಿವು, ಅನುಭವದಿಂದ ತಿಳಿವು, ಚಿಂತನೆಯಿಂದ ಸುಳಿವು   ಅರಿವು ತಿಳಿವು ಸುಳಿವುಗಳಿಂದ ಉಳಿವು ಹೊಸದಾಗಿ ಪೇಟೆ ಪ್ರವೇಶಿಸುವವರಿಗಾಗಿ ರಚಿಸಿದ ' ಷೇರು ಸಂಜೀವಿನಿ' ಕೃತಿಯನ್ನು   sapna ಮತ್ತು ನವಕರ್ನಾಟಕ, ಅಮೆಜಾನ್, beetlebookshop.com ಮೂಲಕ online ನಲ್ಲಿ ಪಡೆಯಬಹುದು.